ಸೋಮವಾರ, ಅಕ್ಟೋಬರ್ 10, 2016

ಕಾರು ಮತ್ತು ಹಯನು

ಮಯ್ಸೂರು-ನಂಜನಗೂಡು-ಮಳವಳ್ಳಿ-ನರಸೀಪುರ-ಚಾಮರಜನಗರದ ಊರುಗಳಲ್ಲಿ ಸಿಕ್ಕಿರುವ ೧೫ ಮತ್ತು ೧೬ ನೇ ನೂರೇಡಿನ(ಅಂದರೆ ಕನ್ನಂಬಾಡಿ ಮತ್ತು ಕಬಿನಿ ಕಟ್ಟೆಗಳನ್ನು ಕಟ್ಟುವ ಮೊದಲೇ) ಕಲ್ಬರಹಗಳಲ್ಲಿ ಬತ್ತದ ಎರಡು ಬೆಳೆಯ ಬಗ್ಗೆ ಹೇಳಲಾಗಿದೆ. ಕಾರ್ ಬತ್ತ ಮತ್ತು ಹಯ್ನ್ ಬತ್ತ
೧. ಕಾರ್ ಬತ್ತ - ಹೆಸರು ಹೇಳುವಂತೆ ಮುಂಗಾರಿನ (ಮುನ್+ಕಾರ್) ಮಳೆಯ ಹುಯ್ಯುವ ಕಾಲದಲ್ಲಿ ಬೆಳೆಯುವ ಬತ್ತ (ಕಾರ್ತಿಕ ತಿಂಗಳಿ ಕಯ್ಯಿಗೆ ಬರುವ ಬೆಳೆ)
೨. ಹಯ್ನ್/ಅಯ್ನ್ ಬತ್ತ - ಮುಂಗಾರು ಮಳೆ ಇಲ್ಲದ ಹೊತ್ತಿನಲ್ಲಿ ಅಂದರೆ ಹಯ್ನ್/ಹಯಿನು ( < ಸಂ. ಪಯಸ್) ನೀರನ್ನು ಅಂದರೆ ಕೆರೆಯ ನೀರನ್ನು ಬಳಸಿಕೊಂಡು ಬೆಳೆಯುವ ಬತ್ತ (ವಯ್ಶಾಕ ತಿಂಗಳಿಗೆ ಕಯ್ಯಿಗೆ ಬರುವ ಬೆಳೆ)
ಅಂದರೆ ಸುಮಾರು ೧೫ನೇ ನೂರೇಡಿನಲ್ಲೇ ಕಾವೇರಿ-ಕಪಿಲೆಯ ಕಣಿವೆಯ ಈ ನಾಡಿನಲ್ಲಿ ಎರಡು ಬತ್ತದ ಬೆಳೆಯನ್ನು ತೆಗೆಯುತ್ತಿದ್ದರು ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು.

ಕಾಮೆಂಟ್‌ಗಳಿಲ್ಲ: