ಮಂಗಳವಾರ, ಫೆಬ್ರವರಿ 07, 2012

’ಪ್ರೌಡಶಾಲೆಯವರೆಗೂ ಸಂಸ್ಕೃತ ಕಡ್ಡಾಯ’-- ಬೇಕಾ ?

ಇವತ್ತಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ’ಪ್ರೌಡಶಾಲೆಯವರೆಗೂ ಸಂಸ್ಕೃತ ಕಡ್ಡಾಯ - ಭೈರಪ್ಪ ಆಗ್ರಹ’ ಎಂಬ ವರದಿಗೆ ಪ್ರತಿಕ್ರಿಯೆ. ಮೊದಲಿಗೆ ಭೈರಪ್ಪನವರು ಹೇಳಿರುವುದು- ’ಭಾರತದ ಜನಜೀವನದ ಭಾಷೆಯಾದ ಸಂಸ್ಕೃತವನ್ನು ಪ್ರೌಢಶಾಲೆಗಳವರೆಗೂ ಕಡ್ಡಾಯಗೊಳಿಸಬೇಕು’ . ಸಂಸ್ಕೃತ ಎಂದಿಗೂ ಜನಜೀವನದ ಭಾಷೆಯಾಗಿರಲಿಲ್ಲ ಬದಲಾಗಿ ಕನ್ನಡ, ತಮಿಳು, ತೆಲುಗು, ಪ್ರಾಕ್ರುತದಂತಹ ಬಾಶೆಗಳು ಜನಜೀವನದ ಬಾಶೆಯಾಗಿತ್ತು, ಇಂದಿಗೂ ಆಗಿವೆ ಎಂಬುದಕ್ಕೆ ಇಂದಿಗೂ ಇವು ಮಾತಿನಲ್ಲಿ ಉಳಿದಿರುವುದೇ ಕಾರಣ. ಹಾಗೆ ನೋಡಿದರೆ ಸಂಸ್ಕ್ರುತ ಒಂದು ಬಾಶೆಯೇ ಅಲ್ಲ ಅದು ಒಂದು ’ಬರಹ’ವಷ್ಟೆ ಎಂದು ನುಡಿಯರಿಗರು ಹೇಳುತ್ತಾರೆ ಯಾಕಂದರೆ ಅದು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ತಾನಾಗಿಯೇ ವರ್ಗಾವಣೆ ಆಗುವುದಿಲ್ಲ. ಆದರೆ ಕನ್ನಡದಂತಹ ನುಡಿಯನ್ನು ತಮ್ಮ ಬೆಳವಣಿಗೆಯ ಅಂಗವಾಗಿ ಮುಂದಿನ ತಲೆಮಾರಿನವರು ಪಡೆಯುತ್ತಿರುತ್ತಾರೆ. ಹೀಗಿರುವಾಗ ಸಂಸ್ಕ್ರುತವನ್ನು ಕಡ್ಡಾಯಮಾಡಬೇಕೆನ್ನುವ ದೋರಣೆ ಎಶ್ಟು ವಯ್-ಗ್ನಾನಿಕ ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ಕೇವಲ ಕೆಲವರಿಗೆ ಸಂಸ್ಕ್ರುತದ ಮೇಲಿನ ಎಮೋಶನಲ್ ನಂಟು ಇರುವುದಕ್ಕೆ ಅದನ್ನು ಎಲ್ಲರಿಗೂ ಕಡ್ಡಾಯ ಮಾಡುವುದು ಎಷ್ಟು ಸರಿ?. ಕನ್ನಡಿಗರ ಏಳಿಗೆಯು ಸಂಸ್ಕ್ರುತ ಇಲ್ಲವೆ ಇಂಗ್ಲಿಶ್ ಕಲಿಯುವುದರಲ್ಲಿಲ್ಲ ಯಾಕಂದರೆ ಇವರಡೂ ಕನ್ನಡಿಗರಿಗೆ ಸ್ವಾಬಾವಿಕವಲ್ಲ.

ಅಲ್ಲದೆ ಭೈರಪ್ಪನವರು ’ಸಂಸ್ಕೃತವನ್ನು ಕನ್ನಡ ವಿರೋಧಿ ಭಾಷೆ ಎಂದು ನೋಡಲಾಗಿದೆ’ ಎಂದು ಹೇಳಿರುವುದರಲ್ಲು ತಪ್ಪು ತಿಳುವಳಿಕೆಯಿದೆ ಯಾಕಂದರೆ ಶ್ರೀವಿಜಯ, ನಯಸೇನ ಮತ್ತು ಆಂಡಯ್ಯ ಇವರೆಲ್ಲರೂ ಆಗಿನ ಕಾಲದಲ್ಲಿ ಕನ್ನಡ ಬರಹದಲ್ಲಿ ಅತೀ ಎನ್ನಿಸುವಷ್ಟು ಸಂಸ್ಕ್ರುತವನ್ನು ಬೆರಸಿರುವುದನ್ನು ಗುರುತಿಸಿ ಅದು ಸರಿಯಲ್ಲ ಎಂದು ಹೇಳಿದ್ದರೆ ಹೊರತು ಯಾರೂ ಸಂಸ್ಕ್ರುತವನ್ನು ವಿರೋದಿಸಿಲ್ಲ. ಯಾವ ಬಾಶೆಯ ಮೇಲೂ ಅನಾದರ ತೋರಿಸುವುದು ಸರಿಯಲ್ಲ; ಹಾಗಂತ ನಮ್ಮದಲ್ಲದ ಬಾಶೆಯನ್ನು ನಾವು ಹೊತ್ತುಕೊಂಡು ಮೆರೆಸಬೇಕಾಗಿಲ್ಲ. ಕನ್ನಡಿಗರು ಸಂಸ್ಕ್ರುತದ ವಿಷಯದಲ್ಲಿ ತಟಸ್ಥ ಧೋರಣೆ ತೋರುತ್ತಾ ಕನ್ನಡದ ಕಸುವನ್ನು ಹೆಚ್ಚಿಸುವ ಕಡೆ ಗಮನ ಕೊಡುವುದು ಈಗ ತುರ್ತಾಗಿ ಆಗಬೇಕಾಗಿರುವುದು ಎಂದು ಹೇಳಬಯಸುತ್ತೇನೆ.

"ಸಂಸ್ಕ್ರುತವನ್ನು ಉಳಿಸುವ ಮೂಲಕ ನಾವು ಆ ಭಾಷೆಯನ್ನು ಉದ್ದಾರ ಮಾಡುತ್ತೇವೆ ಎಂಬ ಬ್ರಮೆಗಿಂತ ಆ ಮೂಲಕ ನಮ್ಮ ಉದ್ಧಾರ ಸಾದ್ಯವಿದೆ ಎಂಬ ಅರಿವಿನೊಂದಿಗೆ ಸಂಸ್ಕ್ರುತದ ಉಳಿವಿಗೆ ಮುಂದಾಗಬೇಕು"
ಮೊದಲಿಗೆ ಭೈರಪ್ಪನವರೇ ಹೇಳಿರುವಂತೆ ದಕ್ಶಿಣ ಬಾರತದ ಬಾಸೆಗಳಿಗೆ ಸಂಸ್ಕ್ರುತ ಮೂಲವಲ್ಲ - ಹೀಗಿರುವಾಗ ನಾವು (ಕನ್ನಡಿಗರು) ಸಂಸ್ಕ್ರುತವನ್ನು ಏಕೆ ಉಳಿಸಬೇಕು? ಅದರಿಂದ ನಮ್ಮ ಉದ್ಧಾರ ಹೇಗ ಆಗುತ್ತೆ? ಬೇಕಾದರೆ ಉತ್ತರ ಬಾರತದವರು ಅದನ್ನು ಉಳಿಸಿಕೊಂದು ಉದ್ದಾರ ಹೊಂದಲಿ. ಈಗಾಗಲೆ ಉತ್ತರಾಕಂಡ ರಾಜ್ಯವು ಸಂಸ್ಕ್ರುತಕ್ಕೆ ಒತ್ತು ಕೊಟ್ಟಿದೆ. ಇಂದು ಬೆಂಗಳೂರಿನಲ್ಲಿರುವ ಹಲವು ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡುವ ಹಾಗಿಲ್ಲ. ಇಂತಹ ಪರಿಸ್ತಿತಿ ಇರುವಾಗ ನಮ್ಮ ಆದ್ಯತೆ ಕನ್ನಡವನ್ನು ಉಳಿಸಿ ಅದರಿಂದ ಏಳೆಗೆಯೆಡೆಗೆ ಹೋಗಬೇಕೇ ಹೊರತು ಸಂಸ್ಕ್ರುತದೆಡೆಗೆ ಅಲ್ಲ.

ಇವೆಲ್ಲಕ್ಕಿಂತ ಹೆಚ್ಚಾಗಿ ಒಂದು ಮಗುವು ಈಗಾಗಲೆ ಕನ್ನಡ, ಇಂಗ್ಲಿಶ್, ಹಿಂದಿ ಬಾಶೆಗಳನ್ನು ಕಲಿಯಬೇಕಾಗಿದೆ ಅದರ ಮೇಲೆ ಸಂಸ್ಕ್ರುತವನ್ನು ಕಡ್ಡಾಯ ಮಾಡಿ ಹೇರಿದರೆ ಆ ಮಕ್ಕಳ ಗತಿ ಏನು? ಯಾವುದನ್ನು ಸರಿಯಾಗಿ ಕಲಿಯಲು ಬಿಡದೆ ಮಕ್ಕಳನ್ನು ನಾವೇ ಎಡಬಿಡಂಗಿ ಮಾಡಿದಂತೆ ಆಗುವುದಿಲ್ಲವೆ?....ಇದರ ಬಗ್ಗೆ ಬೈರಪ್ಪನವರು ಕೊಂಚ ಉಂಕಿಸಲಿ !!

ಶನಿವಾರ, ಫೆಬ್ರವರಿ 04, 2012

ಕನ್ನಡದ ಒಳನುಡಿಗಳು ಮತ್ತು ಬರಹಗನ್ನಡ- ಎರಡು ಪಾಪೆಗಳು

ಗೆಳಯ ಕಿರಣ್ ಹೇಳಿದ ಮಾತನ್ನು ಪಾಪೆಗೆ ಇಳಿಸಿ ಬರಹಗನ್ನಡ ಮತ್ತು ಆಡುನುಡಿಗಳ ನಂಟು ಹೇಗಿರಬೇಕು ಎಂಬುದನ್ನು ಈ ಕೆಳಗಿನ ಪಾಪೆಗಳ ನೆರವಿನಿಂದ ತೋರಿಸಲು ಮೊಗಸಿದ್ದೇನೆ.